ಗುರುವಾರ, ಮೇ 31, 2012

ಈ ಬಾಲಕನ ಕೊಳಲಿನ ಧ್ವನಿಗೆ ಬೆಕ್ಕೂ ಮಾರು ಹೋಯಿತೇ?


Thanks to Dr. Jessey

ಶ್ರೀ ರಾಮಚಂದ್ರ ಕೃಪಾಲು ಭಜಮನ......

Tulasi Raama stotra by Hariharapura Sridhar

ಡಿಂಬಾದಲ್ಲಿರುವ ಜೀವ....

ಶಂಕರಾಚಾರ್ಯರು ಶಿಶ್ಯರೊಡನೆ


ಬುಧವಾರ, ಮೇ 30, 2012

ಇವತ್ತಿಗೂ ಅವನೇ...ಈಕ್ಷಣಕ್ಕೂ ಅವನೇ... ನಾಳೆಗೂ ಅವನೇ


ನನ್ನ ಪತ್ನಿ ನಿತ್ಯವೂ ನನಗೆ ಹೇಳುವ ಮಾತು" ನಿಮಗೆ ಏನೂ ಗೊತ್ತಾಗುಲ್ಲಾ, ನಿಮಗೆ ವ್ಯವಹಾರಜ್ಞಾನವೇ ಇಲ್ಲ"
"ಪರವಾಗಿಲ್ಲ. ಏನಾಯ್ತೀಗ?" ಅನ್ನೋದು ನನ್ನ ಮಾತು....ಯಾಕೆ  ನನ್ನ ಪತ್ನಿ ಹಾಗೆಲ್ಲಾ ಮಾತಾಡ್ತಾಳೆ ಅಂದ್ರೆ....ಮನೆ ಮುಂದೆ ತರಕಾರಿ ವ್ಯಾಪಾರ ಮಾಡುವವರಲ್ಲಿ, ಮನೆ ಕೆಲಸಗಾರರಲ್ಲಿ, ಶ್ರಮ ಜೀವಿಗಳೊಡನೆ ನಾನು ಚರ್ಚೆ ಮಾಡಲು ಹೋಗುಲ್ಲ. ಅವರು ಕೇಳಿದಷ್ಟು ಕೊಟ್ಟು ಬಿಡ್ತೀನಿ. " ನೀವು ದಾನ ಶೂರ ಕರ್ಣ" ಅಂತಾ ಹಂಗಿಸಬೇಡಿ. ನನಗೆ ಯಾವತ್ತಿನಿಂದ ಜೀವನಕ್ಕೆ ತೊಂದರೆ ಯಾಗಿಲ್ಲ, ಅಂದಿನಿಂದ ಹಣವನ್ನು ಉಳಿತಾಯಮಾಡಬೇಕೆಂಬ ಆಸೆ ಬಂದಿಲ್ಲ. ಆಗಾಗ ಯಾವ ಯಾವ ಕೆಲಸ ಮಹತ್ವ ಪಡೆಯುತ್ತವೋ ಅದನ್ನು ಹೇಗಾದರೂ ಮಾಡಿ ಯಶಸ್ವಿಯಾಗಿ ಮುಗಿಸಿದರೆ ಆಯ್ತು. ಮುಂದೆ ನೋಡಿ    ಕೊಳ್ಳೋಣ , ದೇವರಿದ್ದಾನೆ, ಎಂಬ ಭಾವನೆ. ನೋಡಿ ಆ ದೇವರು ಕಳೆದ 25 ವರ್ಷಗಳಿಂದ [ಎಂದಿನಿಂದ ನಾನು ಅವನನ್ನು ಹೊಣೆ ಮಾಡಿದೆ, ಅಂದಿನಿಂದ ಸಲೀಸಾಗಿ ನಡೆಸಿಕೊಂಡು     ಹೋಗುತ್ತಿದ್ದಾನೆ. ನಾಳೆಗೆ ಇಡುವ ಪ್ರಶ್ನೆ ಉದ್ಭಸಿಯೇ ಇಲ್ಲ. ನಾಳೆಗೆ ಅವನಿದ್ದಾನೆ......
ಎರಡು ಮನೆ ಕಟ್ಟುವ ಅವಕಾಶ ಒದಗಿ ಬಂತು. ಒಂದು ನಮ್ಮ ಹಳ್ಳಿಯಲ್ಲಿ . ಒಂದು ಹಾಸನದಲ್ಲಿ. ಆಗೆಲ್ಲಾ ಶ್ರಮಜೀವಿಗಳಿಗೆ ಉದಾರವಾಗಿಯೇ ನೀಡಿದೆ[ಹೀಗೆಂದು ಹೇಳಿಕೊಳ್ಳಬಾರದು, ಆದರೂ ವಿಚಾರ ಹಂಚಿಕೊಳ್ಳದಿದ್ದರೆ ಅದು ಬೇರೆಯವರ ವಿಮರ್ಶೆಗೆ ದಕ್ಕುವುದಿಲ್ಲವಲ್ಲ]
ಅಂದಹಾಗೆ ನಾನು ಯಾವುದನ್ನೂ ವ್ಯಾವಹಾರಿಕವಾಗಿ ನೋಡಲೇ ಇಲ್ಲ. ಶ್ರಮಜೀವಿಗಳಿಗೆ ಅವರ ಕೆಲಸಕ್ಕೆ ಸ್ವಲ್ಪ ಹೆಚ್ಚು ನೀಡಿದರೆ ಆ ಮೂಲಕವಾದರೂ ಅವರ ಯಾವುದೋ ಕಷ್ಟ ಕಾರ್ಪಣ್ಯಕ್ಕೆ ನೆರವಾದಂತೆ ಆಗುತ್ತದೆಂಬುದು ನನ್ನ ಭಾವನೆ. ಈ ಮಾತು ಬಂದಾಗ ಒಬ್ಬರು ತಿಳಿದವರು ನನಗೆ ಏನು ಹೇಳಿದರು ಗೊತ್ತೇ?.......ಬಿಕ್ಷೆಗೆ ಬಂದವನಿಗೆ ಉದಾರವಾಗಿ ನೀಡಿದರೆ ಅವನು ಶಂಖ ಜಾಗಟೆಯನ್ನು ನಿಮ್ಮ ಮನೆ ಬಾಗಿಲಲ್ಲೇ ನೇತುಹಾಕಿ ಆರಾಮವಾಗಿದ್ದು ಬಿಡುತ್ತಾನೆ! 
ಅದು ಅವರ ಭಾವನೆ. ನನ್ನ ಭಾವನೆ ಇದು. ಹುಟ್ಟುವಾಗ ಅತಿ ಬಡತನದಲ್ಲಿ ಬೆಂದ ನನಗೆ ಇಂದು ಭಗವಂತನು ಚೆನ್ನಾಗಿಯೇ ಕೊಟ್ಟಿದ್ದಾನೆಂಬ ಸಂತೋಷವಿದೆ. ನಾಳೆಗೆ ಯೋಚಿಸುವುದಿಲ್ಲ. ಇವತ್ತಿಗೂ ಅವನೇ...ಈಕ್ಷಣಕ್ಕೂ ಅವನೇ... ನಾಳೆಗೂ ಅವನೇ.

ಗುರುವಾರ, ಮೇ 24, 2012

ಗೌರತ್ತೆ




ನಾಲ್ಕು ವರ್ಷಗಳ ಹಿಂದೆ  "ಸಂಪದದಲ್ಲಿ "ಪ್ರಕಟವಾಗಿದ್ದ ಈ ಲೇಖನವನ್ನು ನಮ್ಮತ್ತೆಯ ನೆನಪು ಮಾಡಿಕೊಂಡು ಇಲ್ಲಿ ಪುನ: ಪ್ರಕಟಿಸಿರುವೆ.


ಯಾಕೋ ಇವತ್ತು ನಮ್ಮ ಗೌರತ್ತೆ ನೆನಪು ತುಂಬಾ ಕಾಡ್ತಾ ಇದೆ. ಮನುಷ್ಯನ ಸ್ವಭಾವವೇ ಹಾಗೆ.ಮನೆಯಲ್ಲಿ ಮನೆಮಂದಿಯೆಲ್ಲಾ ಆರೋಗ್ಯವಾಗಿ ಸುಖವಾಗಿದ್ದಾಗ , ಕೈತುಂಬಾ ಕಾಸು ಓಡಾಡ್ತಾ ಇದ್ದಾಗ , ಯಾರ ನೆನಪೂ ಆಗುಲ್ಲಾ. ಅರೆ ನಾನು ಕಷ್ಟಪಟ್ಟು ಕೆಲಸ ಮಾಡ್ತೀನಿ, ಕೈತುಂಬಾ ದುಡೀತೀನಿ, ಯಾರ ಮುಲಾಜು ಏನು? ಸೋಮಾರಿಗಳಾದ್ರೆ ಅವರಿಗೆ ಬದುಕು ಕಷ್ಟ, ಕಷ್ಟ ಪಟ್ಟು ಕೆಲಸ ಮಾಡೋರು ಯಾಕೆ ಹೆದರಬೇಕು? ನಮ್ಮ ಮೂಗಿನ ನೇರಕ್ಕೆ ಎಷ್ಟೆಲ್ಲಾ ಮಾತನಾಡ್ತೀವಿ ರೀ. ಏನೋ ಆ ಭಗವಂತ ಎಲ್ಲವನ್ನೂ ಚೆನ್ನಾಗಿ ಕೊಟ್ಟಾಗ ಹೀಗೆ ನಾವು ಅವನನ್ನೂ ಮರೆತು ಮಾತನಾಡ್ತೀವಿ. ಆದರೆ ಒಂದು ಚಿಕ್ಕ ಕಷ್ಟ ಬಂತೂ ಅಂದ್ರೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಡ್ತೀವಿ. ಆಲ್ವಾ? ಯಾಕೆ ಇಷ್ಟೆಲ್ಲಾ ಬರೀತಿದೀನಿ ಅಂದ್ರೆ , ಕಳೆದ ಎಂಟು ದಿನಗಳಿಂದ ನನಗೆ ವೈರಲ್ ಫೀವರ್, ನಿನ್ನೆಯಿಂದ ಹೆಂಡತಿ ಹಾಗೂ ಮಗ ಇಬ್ರಿಗೂ ಜ್ವರ ಶುರುವಾಗಿದೆ. ಎಲ್ಲರೂ ಒಟ್ಟಿಗೆ ಡಾಕ್ಟರ್ ಹತ್ತಿರ ಹೋಗಿ ಸೂಜಿ ಹಾಕಿಸಿಕೊಂಡು ಬಂದಿದ್ದಾಯ್ತು.ಮನೇಲಿ ಯಜಮಾನನಿಗೆ,ಮಕ್ಕಳಿಗೆ ಹುಷಾರು ತಪ್ಪಿದರೆ ಯಜಮಾಂತಿ ಎಲ್ಲರನ್ನೂ ಸುದಾರಿಸಿಬಿಡ್ತಾಳೆ. ಕಾಲಕಾಲಕ್ಕೆ ಹೊಟ್ಟೆಗೆ ಚೆನ್ನಾಗಿಯೇ ಆಗುತ್ತೆ.ಆದರೆ ಅದೇ ಯಜಮಾಂತಿಯೇ ಮಲಗಿಬಿಟ್ರೆ ದೇವರೇ ಗತಿ. ದೇವರೂ ಕಾಪಾಡುವುದಕ್ಕಾಗುಲ್ಲ. ಆಗಲೇ ಹೇಳಿದಂತೆ ಮನೇಲಿ ಎಲ್ಲರೂ ಹುಷಾರು ತಪ್ಪಿದ್ದೇವೆ. ಯಾರನ್ನು ಯಾರು ಸುದಾರಿಸಬೇಕು? ನನ್ನ ಮಕ್ಕಳಿಗೆ ಒಬ್ಬನಿಗೆ ೨೪ ವರ್ಷ, ಒಬ್ಬನಿಗೆ ೨೩ ವರ್ಷ. ದೊಡ್ಡೋನು ಬಿ.ಇ ಮಾಡಿ ಮೈಸೂರಲ್ಲಿ ಕೆಲಸದಲ್ಲಿದ್ದಾನೆ. ಚಿಕ್ಕೊನುದ್ದೂ ಬಿ.ಇ.ಆಗಿದೆ, ಎಂ.ಬಿ.ಎ ಮಾಡ್ತಾ ಇದ್ದಾನೆ. ಹುಷಾರು ಸ್ವಲ್ಪ ತಪ್ಪಿದರೆ ಸಾಕು ಇಬ್ಬರೂ ಎಳೆ ಮಕ್ಕಳಂತೆಯೇ; ಇವತ್ತು ಚಿಕ್ಕವನಿಗೆ ಹುಷಾರು ತಪ್ಪಿದ್ದರಿ೦ದಲೇ ನಮ್ಮ ಗೌರತ್ತೆ ನೆನಪಾದದ್ದು.ನನ್ನ ಮಗನಿಗೆ ಸ್ವಲ್ಪ ಜ್ವರ ತಲೆನೋವು ಬಂದರೆ ಸಾಕು ನನ್ನ ತೊಡೆ ಮೇಲೆ ಮಲಗಿ ಬಿಡ್ತಾನೆ. ಅವನಿಗೆ ನಿದ್ರೆ ಹತ್ತುವ ವರಗೂ ತಲೆ ಸವರುತ್ತಾ ಇರ್ಬೇಕು. ನನಗೂ ಹುಷಾರಿಲ್ಲ. ಇಂತಾ ಸ್ಥಿತಿಯಲ್ಲೂ ಮಗನಿಗೆ ಸುದಾರಿಸಲೇ ಬೇಕಲ್ಲಾ!! ನಿಜವಾಗಲೂ ಇಂತಹ ಸಂದರ್ಭದಲ್ಲಿ ಎಲ್ಲಾ ಯೋಚನೆಗಳೂ ಬರುತ್ತೆ. ನನ್ನ ಬಾಲ್ಯದ ನೆನಪು ಕಾಡುತ್ತೆ. .. . ........... ನನ್ನ ಬಾಲ್ಯ.....ಅದೊಂದು ದೊಡ್ಡ ಅನುಭವ. ...ಕಿತ್ತು ತಿನ್ನುವ ಬಡತನ , ಒಂದೇ ಮಾತಲ್ಲಿ ಹೇಳಬೇಕೂ ಅಂದ್ರೆ ತುತ್ತು ಅನ್ನಕ್ಕೆ ಹಾಹಾಕಾರ. ಇಲ್ವೆ ಇಲ್ಲಾ ! ಆ ಕಾಲವೇ ಹಾಗೆ. ಅಂದರೆ ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಅವತ್ತಿನ ಬಡತನದ ಬಗೆಗೆ ಸಮಯ ಬಂದಾಗ ಬರೀತೀನಿ. ಆದರೆ ಈಗ ಕೇವಲ ನಮ್ಮ ಗೌರತ್ತೆ ಬಗ್ಗೆ ಮಾತ್ರ ನೆನಪು ಮಾಡಿಕೊಳ್ಳಬೇಕು, ಇವತ್ತಿಗೆ ಅಷ್ಟೆ ಸಾಕು. ಗೌರತ್ತೆ ನಮ್ಮ ಅಪ್ಪನ ಅಕ್ಕ. ಅವಳ ಹತ್ತು ವರ್ಷಕ್ಕೆ ಅರಕಲಗೂಡು ಹತ್ತಿರ ಮಗ್ಗೆಗೆ ಕೊಟ್ಟು ಮದುವೆ ಯಾಗಿತ್ತ೦ತೆ. ಮದುವೆ ಯಾದ ಒ೦ದು ವರ್ಷದಲ್ಲಿ ಗಂಡ ಗೊಟಕ್. ಅವತ್ತಿನಿ೦ದ ಗೌರತ್ತೆ ನಮ್ಮ ಮನೆಯಲ್ಲೇ. ಮದುವೆ ಅ೦ದ್ರೆ ಏನು ಅ೦ತಾ ಗೊತ್ತಾಗುವುದಕ್ಕೆ ಮು೦ಚೆ ವಿಧವೆಯ ಪಟ್ಟ. ಅಬ್ಭಾ ಎಂತಾ ಅನ್ಯಾಯ? ಅವತ್ತಿನಿ೦ದ ಅವಳ ಸ್ವ೦ತ ಜೀವನ ಅ೦ದ್ರೆ ಏನು ಅ೦ತಾ ಅವಳಿಗೆ ಗೊತ್ತೇ ಇಲ್ಲ.ನಮ್ಮಪ್ಪನ ಮದುವೆ ಆಗಿ ನಾವೆಲ್ಲಾ ಹುಟ್ಟಿದಮೇಲೆ ನಮನ್ನು ನಮ್ಮಮ್ಮನಿಗಿ೦ತ ಚೆನ್ನಾಗಿ ಸಲಹಿದ್ದು ನಮ್ಮ ಗೌರತ್ತೆಯೇ. ನಮ್ಮ ಗೌರತ್ತೆ ಸಾಯುವ ವರೆಗೂ ನಮ್ಮ ಮನೆಯ ಮಕ್ಕಳೆಲ್ಲಾ ಬಾರೆ-ಹೋಗೆ ಅಂತಾನೆ ಅ೦ತಿದ್ದು. ಅವರಿಗೆ[ಅವಳಿಗೆ] ಅದೇ ಚೆನ್ನಾ.ನಮ್ಮ ಮನೆಯಲ್ಲಿ ಬಡತನವಿದ್ದರೂ ನಾಲ್ಕಾರು ದನಗಳು ಇದ್ದವು. ಹಾಗಾಗಿ ಕರಾವು ಇತ್ತು. ಅವತ್ತು ಊಟ ಮಾಡಿರಲಿ ಬಿಡಲೀ ಮಲಗುವಾಗ ಎಲ್ಲಾ ಮಕ್ಕಳಿಗೂ ನಮ್ಮ ಗೌರತ್ತೆ ಒಂದು ಬಟ್ಟಲು ಹಾಲು ಕುಡಿಸಿಯೇ ಮಲಗಿಸ್ತಾ ಇದ್ದಳು. ಒ೦ದುವೇಳೆ ನಿದ್ರೆ ಬಂದು ಮಲಗಿದ್ದರೂ ಎಬ್ಬಿಸಿ ಹಾಲು ಕುಡಿಸಿಯೇ ಮಲಗಿಸುತ್ತಿದ್ದಳು. ಸ್ವಲ್ಪಾ ತಲೆನೋವು ಅಂದ್ರೆ ಸಾಕು ತೊಡೆ ಮೇಲೆ ಮಲಗಿಸಿಕೊಂಡು ಹಿತವಾಗಿ ತಲೆ ನೇವರಿಸಿ ನಿದ್ರೆ ಮಾಡಿಸಿದಮೇಲೆ ನಮ್ಮಮ್ಮನನ್ನು ಕರೆದು " ನರಸಮ್ಮಾ, ಮಗುವನ್ನು ಹಾಸಿ ಮಲಗಿಸು, ನಿದ್ರೆ ಮಾಡಿದೆ ಅಂತಾ ಹೇಳಿ, ನಿದಾನವಾಗಿ ಹಾಸಿಗೆಯಲ್ಲಿ ಮಲಗಿಸುತ್ತಿದ್ದರು.[ಹಾಸಿಗೆ ಅ೦ದ್ರೆ ಹೇಗಿತ್ತು ಅನ್ನೋದಕ್ಕೆ ಒ೦ದು ಕಥೆ ಬರೀ ಬೇಕಾಗುತ್ತೆ , ಸಧ್ಯಕ್ಕೆ ಆರುಜನ ಮಕ್ಕಳು, ಅಮ್ಮ, ಅತ್ತೆ, ಅಜ್ಜಿ ಸೇರಿ ಒಂದು ಚಾಪೆಯ ಮೇಲೆ ಒ೦ದು ಹರಕಲು ಜಮಖಾನ.ಅಪ್ಪ ಮಾತ್ರ ಬೇರೆ ಮಲಗ್ತಾ ಇದ್ರು ] ಇನ್ನು ನಮ್ಮಪ್ಪನ ಬಗ್ಗೆ ಅವರಿಗಿದ್ದ ಪ್ರೀತಿ! ಅದನ್ನು ಅಳೆಯಲು ಸಾಧ್ಯವೇ ಇಲ್ಲ. ನಮ್ಮಪ್ಪ ಮಾತ್ರ ಅವರನ್ನು ಸಿಕ್ಕಾಪಟ್ಟೆ ಬೈತಿದ್ರು. ಆದರೆ ನಮ್ಮತ್ತೆ ಮಾತ್ರ ಅವಳ ತಮ್ಮನನ್ನು ಒ೦ದು ದಿನಾ ಬೈಲಿಲ್ಲ.ನಮ್ಮತ್ತೆ ಜೊತೆಗೆ ನಮ್ಮಜ್ಜಿ ,ನಮ್ಮ ದೊಡ್ಡಮ್ಮ ಎಲ್ಲಾ ಸೇರಿ ಐದುಜನ ದೊಡ್ಡೋರು ಮನೇಲಿದ್ರು. ಬಡತನ ಇದ್ದರೂ ಜೀವನಕ್ಕೆ ಸೆಕ್ಯೂರಿಟಿ ಹೇಗಿತ್ತು ಅಂದ್ರೆ ಮನೇಲಿ ಯಾರಿಗಾದರೂ ಹುಷಾರಿಲ್ಲ ಎಂದರೆ ಯೋಚಿಸಲೇ ಬೇಕಿರಲಿಲ್ಲ. ನೋಡೋದಕ್ಕೆ ಸದಾಕಾಲ ನಮ್ಮತ್ತೆ. ಇನ್ನೊಂದು ವಿಷಯ ಹೇಳಲೇ ಬೇಕು-ನಮ್ಮತ್ತೆಗೆ ಅವರು ಸಾಯೋ ವರಗೂ ಹುಶಾರೇ ತಪ್ಪಲಿಲ್ಲ. ಕಾರಣ ಗೊತ್ತೇ? ಅವರ ದೇಹದಬಗ್ಗೆ ಅವರಿಗೆ ಮಮಕಾರವೇ ಇರಲಿಲ್ಲ ವಲ್ಲ. ಅಧ್ಯಾತ್ಮದಲ್ಲಿ ಈ ದೇಹ ನಾನಲ್ಲ ಅಂತಾ ಹೇಳ್ತಾರೆ. ಆದ್ರೆ ಅಮ್ಮತ್ತೆಗೆ ಅಧ್ಯಾತ್ಮ ಅಂದ್ರೆ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದ ವಿಷಯ ಅಂದ್ರೆ ಅವರ ತಮ್ಮನ ಮಕ್ಕಳು ಅಲ್ಲಲ್ಲ ಅವರ ಮಕ್ಕಳು ಸುಖವಾಗಿರಲಿ- ಎಂಬುದು ಅಷ್ಟೆ. ಈಗ....ನಮ್ಮಪ್ಪ ಅಮ್ಮಾ , ನಮ್ಮತ್ತೆ ಕೂಡ ಇಲ್ಲ. ಹೋಗಿ ೮-೧೦ ವರ್ಷ ವಾಯ್ತು. ಜೀವನಕ್ಕೆ ಯೋಚನೆ ಇಲ್ಲ. ಆದರೆ ಗೌರತ್ತೆ ಅಂತಾ ತಾಯಿ ಇಲ್ಲದಿರುವ ಕೊರತೆ ನಿತ್ಯವೂ ಕಾಡುತ್ತೆ. ಒಲೆಗೊ೦ದು ಒದೆಗೊರಡು ,ಮನೆಗೊ೦ದು ಮುದಿಗೊರದು ಇರಬೇಕೂ ಅಂತಾ ನಮ್ಮಮ್ಮ ಹೇಳ್ತಾ ಇದ್ದರು.

ಬುಧವಾರ, ಮೇ 23, 2012

ಚಿ||ರಾ||ಅಕ್ಷಯ್ ಹಾಡುಗಾರಿಕೆ

ಏಳನೇ ತರಗತಿಯಲ್ಲಿ ಓದುತ್ತಿರುವ ಚಿ||ರಾ||ಅಕ್ಷಯ್ ಹಾಡುಗಳನ್ನು ಕೇಳಿ. ಕಿರಿಯ ಕಲಾವಿದನಿಗೆ ಪ್ರೋತ್ಸಾಹಿಸಿ.

ಸಮಾಜ ಸ್ಮರಣೆ ಸಮಾರಂಭ

ಚಿ||ರಾ|| ಶ್ರೀಕಂಠ ಮತ್ತು ಚಿ||ಸೌ||ರಶ್ಮಿ ಇವರ ವಿವಾಹ ಸಂದರ್ಭದಲ್ಲಿ ದಿನಾಂಕ 12.5.2012  ರಂದು ಹಾಸನದಲ್ಲಿ ನಡೆದ ಸಮಾಜಸ್ಮರಣೆ ಸಮಾರಂಭದ ದೃಶ್ಯಗಳು
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮಾಡಿದ ಕು||ಸ್ವಾತಿ
ಸಮಾಜ ಸ್ಮರಣೆ ಕಾರ್ಯಕ್ರಮದಲ್ಲಿ  ತನ್ನ ಮಧುರ ಕಂಠದಿಂದ ರಂಜಿಸಿದ        ಚಿ||ರಾ||ಅಕ್ಷಯ್  

ಶ್ರೀ ನಾಗೇಶ್ ಇವರಿಂದ ನಲ್ನುಡಿ

 "ಸಮಾಜ ಋಣ"  ಉಪನ್ಯಾಸ ನೀಡಿದ    ಅನಂತ ನಾರಾಯಣ್ ಅವರಿಗೆ      ಶ್ರೀ ರಾಮಕೃಷ್ಣರಿಂದ ಫಲ ಸಮರ್ಪಣೆ

ಕಾರ್ಯಕ್ರಮ ನಿರ್ವಹಣೆ ಮಾಡಿದ ಶ್ರೀ ಕವಿನಾಗರಾಜ್ ರಿಗೆ ಶ್ರೀ ರಮೇಶ್ ರಿಂದ ಫಲ ಸಮರ್ಪಣೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ರಾದ ಶ್ರೀ ಶ್ರೀನಿವಾಸರಿಗೆ ಶ್ರೀ ಮೋಹನ್ ರಿಂದ ಫಲ ಸಮರ್ಪಣೆ

"ವಿವಾಹ ಮಹತ್ವ" ಉಪನ್ಯಾಸ ನಡೆಸಿಕೊಟ್ಟ  ಡಾ.ಶ್ರೀ ವತ್ಸ.ಎಸ್. ವಟಿಯವರಿಗೆ ಶ್ರೀ ಶ್ರೀಕಂಠಮೂರ್ತಿ ಇವರಿಂದ ಫಲ ಸಮರ್ಪಣೆ


ರಾ.ಸ್ವ. ಸಂಘದ ಜಿಲ್ಲಾ ಕಾರ್ಯವಾಹರಾದ ಶ್ರೀ ವಿಜಯ್ ಕುಮಾರ್ ಮತ್ತು  ಹಿರಿಯ ಕಾರ್ಯಕರ್ತರಾದ ಶ್ರೀ ರಮೇಶ್ ಇವರಿಗೆ ಹರಿಹರಪುರಶ್ರೀಧರರಿಂದ "ಮಂಗಲ ನಿಧಿ" ಸಮರ್ಪಣೆ

ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ತಮ್ಮನ್ನು  ಪೂರ್ಣವಾಗಿ ತೊಡಗಿಸಿಕೊಂಡು ಯಶಸ್ಸಿಗೆ ಕಾರಣರಾದ ಶ್ರೀಮತಿ ಲಲಿತಾ ಮತ್ತು ಶ್ರೀ ರಮೇಶ್ ದಂಪತಿಗಳಿಗೆ ಮನೆಯ ಹಿರಿಯರಾದ  ಶ್ರೀಮತಿ ಉಮಾ ಮತ್ತು ಶ್ರೀ ನಾಗೇಶ್ ಇವರಿಂದ ಗೌರವಾರ್ಪಣೆ

ಹರಿಹರಪುರಶ್ರೀಧರರಿಂದ ಪ್ರಾಸ್ತಾವಿಕ ನುಡಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಸನ ಆಕಾಶವಾಣಿಯ ಕಾರ್ಯಕ್ರಮನಿರ್ವಾಹಕರಾದ ಶ್ರೀ ಶ್ರೀನಿವಾಸರಿಂದ ಅಧ್ಯಕ್ಷರ ನುಡಿ


ತಮ್ಮ ಮಧುರ ಕಂಠದಿಂದ ಸಂಗೀತ ಸುಧೆಯನ್ನು ಹರಿಸಿದ ಶ್ರೀಮತಿ ಸುಧಾ ನಟರಾಜ್


ಅಪ್ಪ ಅಮ್ಮನ ಆದರ್ಶದಂತೆ ಸಮಾಜಮುಖಿ  ಜೀವನ ನಡೆಸುತ್ತಿರುವ    ಶ್ರೀಮತಿ ಸ್ವರ್ಣ ರಾಮಕೃಷ್ಣ ದಂಪತಿಗಳಿಗೆ  ಶ್ರೀಮತಿ ಸರ್ವಮಂಗಳ ಮತ್ತು ಶ್ರೀಧರರಿಂದ ಗೌರವಾರ್ಪಣೆ

ಆಶೀರ್ವಾದ  ಪತ್ರ ವಾಚನ-ಶ್ರೀಮತಿ ಲಲಿತಾರಮೇಶ್ ಇವರಿಂದ

ನವ ದಂಪತಿಗಳಾದ ಚಿ||ಸೌ||ರಶ್ಮಿ ಮತ್ತು ಚಿ||ರಾ|| ಶ್ರೀಕಂಠ

ಸಮಾರಂಭದಲ್ಲಿ ಪಾಲ್ಗೊಂಡವರ  ಒಂದು ನೋಟ

ಸಮಾರಂಭದಲ್ಲಿ ಪಾಲ್ಗೊಂಡವರ  ಮತ್ತೊಂದು  ನೋಟ

ಶನಿವಾರ, ಮೇ 19, 2012

ಚಿ||ರಾ|| ಶ್ರೀಕಂಠನ ವಿವಾಹ

ಶ್ರೀಯುತ ಕವಿ ನಾಗರಾಜರಿಂದ ಪ್ರಾಸ್ತಾವಿಕ


ನನ್ನ ಪುತ್ರ ಚಿ||ರಾ|| ಶ್ರೀಕಂಠನ ವಿವಾಹವು ಚಿ||ಸೌ|| ರಶ್ಮಿಯೊಡನೆ ದಿನಾಂಕ 7.5.2012 ರಂದು ಬೆಂಗಳೂರಿನಲ್ಲಿ ನಡೆಯಿತು.ನಂತರ ಹಾಸನದಲ್ಲಿ ಆರತಕ್ಷತೆ, ಸಮಾಜಸ್ಮರಣೆಕಾರ್ಯಕ್ರಮ, ರುದ್ರಾಭಿಶೇಕ, ಹಾಸನದ ವೃದ್ಧಾಶ್ರಮ ಬಂಧುಗಳೊಡನೆ ಭೋಜನ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಮತ್ತು ಸಮಾಜ ಸ್ಮರಣೆ ಕಾರ್ಯಕ್ರಮದ ಪ್ರಾರ್ಥನೆಯ ಧ್ವನಿ ಕ್ಲಿಪ್ ಮತ್ತು ಉಪನ್ಯಾಸದ ಕ್ಲಿಪ್ ಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಶ್ರೀಯುತ ಅನಂತನಾರಾಯಣರು ಮಾಡಿರುವ ಉಪನ್ಯಾಸವು ಇಂದಿನ ಯುವಕರಿಗೆ ಅತ್ಯಂತ ಉಪಯುಕ್ತವಾಗಿದೆ. ವಿವಾಹದ ಮಹತ್ವ ಕುರಿತು ಡಾ. ಶ್ರೀವತ್ಸ ಎಸ್. ವಟಿಯವರು ಮಾಡಿರುವ ಉಪನ್ಯಾಸವನ್ನು ಇನ್ನೂ ಹಲವು ಚಿತ್ರಗಳೊಡನೆ ಶೀಘ್ರದಲ್ಲಿಯೇ ಇಲ್ಲಿ  ಪ್ರಕಟಿಸಲಾಗುವುದು

.

ಶ್ರೀಮತಿ ಸುಧಾನಟರಾಜ್ ರಿಂದ ಸಂಗೀತಸುಧೆ


ಶ್ರೀಯುತ ಅನಂತನಾರಾಯಣರಿಂದ ಉಪನ್ಯಾಸ"ಸಮಾಜಋಣ"




ಶ್ರೀಕಂಠನ ಪಕ್ಕದಲ್ಲಿ ಶ್ರೀ ಕವಿನಾಗರಾಜ್ ಮತ್ತು ಶ್ರೀಕಂಠನ ಮಾವ ಶ್ರೀ ವೆಂಕಟೇಶ್ ರಶ್ಮಿಯ ಪಕ್ಕದಲ್ಲಿ ಅವರ ತಾಯಿ ಶ್ರೀಮತಿ ಸಾವಿತ್ರಿ ಮತ್ತು  ಶ್ರೀಮತಿ ಭಾರತೀ ನಾಗರಾಜ್

ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀ ಎಮ್.ಎಸ್.ಶ್ರೀಕಂಠಯ್ಯ ದಂಪತಿಗಳೊಡನೆ


ಶ್ರೀಮತಿ ಸರ್ವಮಂಗಳ ಇವರ ತಾಯಿ ಮತ್ತು ಕುಟುಂಬ

ಶ್ರೀಧರ್ ಅವರ ಸೋದರ ಸೋದರಿಯರು ಮತ್ತು  ಕುಟುಂಬ



ಹರಿಹರಪುರ ಶ್ರೀಧರರಿಂದ ಸ್ವಾಗತನುಡಿ

 




ಡಾ.ಶ್ರೀವತ್ಸ ಎಸ್.ವಟಿಯವರ ಉಪನ್ಯಾಸ" ವಿವಾಹ ಮಹತ್ವ"